ಬಿಎಂಆರ್ಸಿಎಲ್ ಈ ನಿಲ್ದಾಣಕ್ಕೆ 48 ಎಕರೆ ಭೂಮಿ ಮತ್ತು ಕಾಡುಗೋಡಿ ಡಿಪೋವನ್ನು ಸ್ವಾಧೀನಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮೆಟ್ರೋ ಯೋಜನೆಗಾಗಿ ಬೈಯಪ್ಪನಹಳ್ಳಿ ಮತ್ತು ಜ್ಯೋತಿಪುರಂ ನಿಲ್ದಾಣದ ನಡುವೆ 4 ಎಕರೆಗಳಷ್ಟು ಸ್ಥಳ ಬೇಕಾಗುತ್ತದೆ. "ಹಂತ 2 ಅನ್ನು ಅಂತಿಮಗೊಳಿಸಿದ ನಂತರ, ಕೆ ಆರ್ ಪುರಮ್-ಸಿಲ್ಕ್ ಬೋರ್ಡ್ ಮಾರ್ಗವನ್ನು ಪ್ರಾರಂಭಿಸಲಾಗುವುದು, ಬೈಯಪ್ಪನಹಳ್ಳಿ ಆಗ ಇಂಟರ್ ಚೇಂಜ್ ನಿಲ್ದಾಣವಾಗಲಿದೆ. ಕೆ ಆರ್ ಪುರಮ್ ಮಾರ್ಗಕ್ಕೆ ಇಲ್ಲಿಂದ ಲಿಂಕ್ ದೊರೆಯಲಿದೆ.