ಗಜೇಂದ್ರಗಡದಿಂದ ಗದಗಕ್ಕೆ ತೆರಳುತ್ತಿದ್ದ ಬಸ್ ಕೊಡಗಾನೂರು ಬಳಿ ಬರುತ್ತಿದ್ದಂತೆ ಚಾಲಕನ ಅಜಾಗರೂಕತೆಯ ಕಾರಣ ರಸ್ತೆ ಪಕ್ಕಕ್ಕೆ ಪಲ್ಟಿ ಆಗಿದೆ. ಆ ವೇಳೆ ನಾಗವ್ವ ಅವರಿಗೆ ಗಂಭೀರ ಗಾಯವಾಗಿದ್ದು ಆಂಬುಲೆನ್ಸ್ ಗೆ ಕರೆ ಮಡಿದರೂ ಅದು ಸೂಕ್ತ ಸಮಯಕ್ಕೆ ಬರದಿದ್ದಾಗ ಇನ್ನೊಂದು ಸರ್ಕಾರಿ ಬಸ್ನಲ್ಲಿಯೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ನಾಗವ್ವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ 8 ಜನರನ್ನು ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಲಾಗಿದೆ.