ಕೆಡಿಎ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಮತ್ತು ಇತರೆ ಅಧಿಕಾರಿಗಳು ನಿನ್ನೆ ಕೆಐಎಗೆ ಭೇಟಿ ನೀಡಿ ಕೆಐಎಎ ನಲ್ಲಿ ಕನ್ನಡ ಭಾಷೆ ಬಳಕೆ ಕುರಿತು ಪರಿಶೀಲನೆ ನಡೆಸಿದರು. ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ಅವರು, ತಮ್ಮ ಒತ್ತಾಯದ ನಂತರ, ಕನ್ನಡದಲ್ಲಿ ಸಹ ವಿಮಾನ ಸಂಚಾರ ವಿವರವನ್ನು ಪ್ರಕಟಿಸಲು ಕೆಐಎ ಅಧಿಕಾರಿಗಳು ಒಪ್ಪಿದ್ದಾರೆ ಎಂದರು."ನಾವು ಈಗ ಕೆಐಎ ಮತ್ತು ಖಾಸಗಿ ಆಪರೇಟರ್ ಗಳಿಗೆ ಕನ್ನದದಲ್ಲಿಯೂ ವಿಮಾನ ಸಂಚಾರ ಕುರಿತ ಪ್ರಕಟಣೆಗಳನ್ನು ನೀದಬೇಕೆಂದು ಒತ್ತಾಯಿಸಿದ್ದೇವೆ. ಅವರು ಅದನ್ನು ನ.1 ರಿಂದ ಜಾರಿಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ '' ಎಂದು ಅವರು ಹೇಳಿದರು.