ಭಯೋತ್ಪಾದಕ ಯಾಸೀನ್ ಭಟ್ಕಳ್ ನ್ನು ಬಹುವಚನದಲ್ಲಿ ಸಂಬೋಧಿಸಿ, ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಏಕವಚನದಲ್ಲಿ ಸಂಬೋಧಿಸುವಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದು ಕರ್ನಾಟಕದ ದುರ್ದೈವ, ಕಳೆದ 25 ವರ್ಷದಿಂದ ಕರ್ನಾಟಕದ ಕರಾವಳಿ ಕೋಮು ಸಂಘರ್ಷದ ಕಾರಣದಿಂದ ನರಳುತ್ತಿದೆ. ಇದಕ್ಕೆ ಮುಕ್ತಾಯ ಹಾಡಬೇಕಾದರೆ ಒಂದೇ ಸಮುದಾಯವನ್ನು ಓಲೈಕೆ ಮಾಡದ, ಪಕ್ಷಾತೀತ ಸರ್ಕಾರ ರಾಜ್ಯದಲ್ಲಿ ಬರಬೇಕಿದೆ. ಆ ರೀತಿಯ ನಾಡಿನ ಬಗ್ಗೆ ಕಳಕಳಿ ಇಟ್ಟಿರುವ ಸರ್ಕಾರ ರಚಿಸುವುದಕ್ಕೆ ಮಂಗಳೂರು ಚಲೋ ಮೊದಲ ಹೆಜ್ಜೆ ಎಂದು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹೇಳಿದ್ದಾರೆ.