ಡಾ.ಕೆ ಶಿವರಾಮ ಕಾರಂತ್ ಲೇಔಟ್ ನಲ್ಲಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಲಾಗಿಲ್ಲ. ಲೇಔಟ್ ನಿರ್ಮಾಣಕ್ಕಾಗಿ 2008ರಲ್ಲಿ 3,546 ಎಕರೆಯಷ್ಟು ಭೂಮಿಯನ್ನು ನೋಟಿಫೈ ಮಾಡಲಾಗಿತ್ತು. 2008-10 ರ ಅವಧಿಯಲ್ಲಿ ಈ ಹಿಂದಿನ ಸರ್ಕಾರ ಬಿಡಿಎ ಗೆ 257.20 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಲು ನಿರ್ದೇಶನ ನೀಡಿತ್ತು. ಇದಾದ ಬಳಿಕ 2012-14 ರಲ್ಲಿ ಭೂ ಸ್ವಾಧೀನ ಅಧಿಕಾರಿಗಳು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ ಆದೇಶದಲ್ಲಿ ನೀಡಲಾಗಿದ್ದ ಮಾನದಂಡಗಳ ಪ್ರಕಾರ 446.07 ಎಕರೆಯಷ್ಟು ಭೂಮಿಯನ್ನು ನೋಟಿಫೈ ಆದೇಶದಿಂದ ಹೊರಗಿಟ್ಟರು ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.