ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೆಲವು ಘಟನೆಗಳು ಜಿಲ್ಲೆಯ ಕೋಮು ಸಾಮರಸ್ಯತೆಗೆ ಧಕ್ಕೆ ತರುತ್ತವೆಯಾದರೂ, ಈ ಜಿಲ್ಲೆಯ ಜನತೆ ಯಾವತ್ತೂ ಸಹೋದರತೆ ಮತ್ತು ಸಾಮರಸ್ಯವನ್ನೇ ಬಯಸುತ್ತಾರೆ ಅನ್ನುವುದಕ್ಕೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದ ಮೆಹಂದಿ ಕಾರ್ಯಕ್ರಮ ಸಾಕ್ಷಿಯಾಯಿತು. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದರು