ಕಾರು ಅಪಘಾತ: ಮಾಜಿ ಎಂಪಿ ವಿಶ್ವನಾಥ್ ಪುತ್ರನಿಗೆ ಗಾಯ

ಮೈಸೂರು ಜಿಲ್ಲೆಯ ಕೆ.ಆರ್.ಪೇಟೆ ಹೊರವಲಯದಲ್ಲಿ ತಡರಾತ್ರಿ ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ರ ಕಾರು ಅಪಘಾತಕ್ಕೀದಾಗಿದೆ.
ಕಾರ್ ಅಪಘಾತದಲ್ಲಿ ಮಾಜಿ ಎಂಪಿ ವಿಶ್ವನಾಥ್ ಪುತ್ರನಿಗೆ ಗಾಯ
ಕಾರ್ ಅಪಘಾತದಲ್ಲಿ ಮಾಜಿ ಎಂಪಿ ವಿಶ್ವನಾಥ್ ಪುತ್ರನಿಗೆ ಗಾಯ
ಕೆ.ಆರ್.ಪೇಟೆ: ಮೈಸೂರು ಜಿಲ್ಲೆಯ ಕೆ.ಆರ್.ಪೇಟೆ ಹೊರವಲಯದಲ್ಲಿ ತಡರಾತ್ರಿ ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ರ ಕಾರು ಅಪಘಾತಕ್ಕೀದಾಗಿದೆದ್.
ಅದೃಷ್ಟವಶಾತ್ ಪೂರ್ವಜ್ ಅಪಾಯದಿಂದ ಪಾರಾಗಿದ್ದಾರೆ.  ಪೂರ್ವಜ್ ತನ್ನ ಕಾರಿನಲ್ಲಿ ಚಂದಗಾಲ ಗ್ರಾಮಕ್ಕೆ ಹೊರಟಿದ್ದ ವೇಳೆ ಅಲೂಗಡ್ಡೆ ತುಂಬಿದ ಗೂಡ್ಸ್ ಆಟೋ ಮುಖಾಮುಖಿಯಾಗಿ ಈ ಘಟನೆ ಸಂಭವಿಸಿದೆ. 
ಘಟನೆಯಲ್ಲಿ ಆಟೋದಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ವಜ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಅಪಘಾತದಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.  
ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com