ಉದಾರ ಮತ್ತು ವಿವಾದ ರಹಿತ ಕವಿ ನಿಸಾರ್ ಅಹ್ಮದ್ ಅವರಿಗೆ ಸರ್ಕಾರ ನಂದಿ ಧ್ವಜದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿತು. ಡ್ರಮ್ ನ ಸಂಗೀತಕ್ಕೆ ಜನಪದ ಕಲಾವಿದರು ನೃತ್ಯ ಮಾಡಿದರು. ದಸರಾ ಕ್ರೀಡೆ, ಕುಸ್ತಿ ಮತ್ತು ಯುವ ದಸರಾ ಹೊರತುಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮ 6 ಸ್ಥಳಗಳಲ್ಲಿ ನಡೆಯಲಿದೆ.
ಮೈಸೂರು ಅರಮನೆ ರಾಣಿ ಪ್ರಮೋದಾ ದೇವಿ ಒಡೆಯರ್ ಅವರ ನೇತೃತ್ವದಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರು ಅರಮನೆಯೊಳಗೆ ನಡೆಯುವ ಖಾಸಗಿ ದರ್ಬಾರ್ ಇನ್ನು ಕೂಡ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ರಾಣಿ ಪ್ರಮೋದಾ ದೇವಿಯವರು ಖುದ್ದಾಗಿ ಖಾಸಗಿ ದರ್ಬಾರ್ ನ ಮೇಲ್ವಿಚಾರಣೆ ನಡೆಸಿ 9 ದಿನಗಳ ಕಾಲ ದರ್ಬಾರ್ ಗೆ ಬೇಕಾದ ಸಾಂಪ್ರದಾಯಿಕ ನಿಲುವಂಗಿಗಳು, ಮೈಸೂರು ಪೇಟಾ ಮತ್ತು ಆಭರಣಗಳನ್ನು ಬಳಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ದರ್ಬಾರ್ ಸಭಾಂಗಣದಲ್ಲಿ ಚಿನ್ನದ ರಥ ಸಜ್ಜಾಗಿದೆ.