ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮದ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ "ದೇಶದ ಇತಿಹಾಸದಲ್ಲಿ ಈ ಗ್ರಾಮದ ಹೆಸರು ಚಿರಸ್ಥಾಯಿಯಾಗಲಿದೆ. ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಬೇಕಾದರೆ ರಾಜ್ಯದ ಅಭಿವೃದ್ಧಿ ಆಗಬೇಕು. ಯುವ ಜನರು ಗ್ರಾಮದ ಅಭಿವೃದ್ಧಿ ಕುರಿತು ಶ್ರದ್ಧೆ ವಹಿಸಬೇಕು" ಎಂದು ಕರೆ ಕೊಟ್ಟರು.