ಬೂತ್ ಸಮಿತಿಗಳ ರಚನೆಯು ಮಂದಗತಿಯಲ್ಲಿ ಸಾಗುತ್ತಿರುವ ಕಾರಣ, ರಾಹುಲ್ ಅವರ ರ್ಯಾಲಿ ಅಕ್ಟೋಬರ್ ಮಧ್ಯದಲ್ಲಿ ನಡೆಯಲಿದೆ. "ಉತ್ತರ ಕರ್ನಾಟಕದ ಬೂತ್ ಸಮಿತಿಗಳ ರಚನೆಯು ಶೇ. 80 ರಷ್ಟು ಬೂತ್ ಗಳಲ್ಲಿ ಪೂರ್ಣಗೊಂಡಿದೆ. ಪ್ರತಿಯೊಂದು ಸಮಿತಿಯು 13 ರಿಂದ 20 ಸದಸ್ಯರನ್ನು ಹೊಂದಿರುತ್ತದೆ. ಪಕ್ಷವು ಈಗ 'ಮನೆ ಮನೆಗೆ ಕಾಂಗ್ರೆಸ್' ಪ್ರಚಾರದಲ್ಲಿ ತೊಡಗಿದೆ, "ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್. ಆರ್. ಪಾಟೀಲ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.