ಅಂಬಾರಿ ಹೊತ್ತ ಅರ್ಜುನ ಮೆರವಣಿಗೆ ಪ್ರಾರಂಭವಾಗಲು 45 ನಿಮಿಷ ಕಾದ

ಈ ಬಾರಿ ಅಂಬಾರಿ ಹೊತ್ತ ಅರ್ಜುನ ಬನ್ನಿ ಮಂಟಪದೆಡೆಗೆ ಮೆರವಣಿಗೆ ಹೊರಡಲು ಸುಮಾರು 45 ನಿಮಿಷಗಳ ಕಾಲ ಕಾಯಬೇಕಾಯಿತು.
ಅಂಬಾರಿ
ಅಂಬಾರಿ
ಮೈಸೂರು: ಈ ಬಾರಿ ಅಂಬಾರಿ ಹೊತ್ತ ಅರ್ಜುನ ಬನ್ನಿ ಮಂಟಪದೆಡೆಗೆ ಮೆರವಣಿಗೆ ಹೊರಡಲು ಸುಮಾರು 45 ನಿಮಿಷಗಳ ಕಾಲ ಕಾಯಬೇಕಾಯಿತು. ಚಿನ್ನದ ಅಂಬಾರಿ 4.15 ಕ್ಕೇ ಅರ್ಜುನನ ಹೆಗಲೇರಿತ್ತಾದರೂ, ಅರಮನೆಯ ಮುಖ್ಯ ದ್ವಾರದಿಂದ ಹೊರಡಲು 45 ನಿಮಿಷಗಳ ಕಾದು ಮಾರ್ಗ ತೆರವುಗೊಂಡ ನಂತರ ಹೊರಟಾಗ ಸುಮಾರು 5 ಗಂಟೆಯಾಗಿತ್ತು. 
ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ 4:45 ಕ್ಕೆ ಸಲ್ಲುವ ಕುಂಭ ಲಗ್ನಕ್ಕೆ ನಿಶ್ಚಯವಾಗಿತ್ತು. ಆದರೆ ನಿಗದಿಯಾಗಿದ್ದ ಸಮಯಕ್ಕಿಂತ 15 ನಿಮಿಷ ತಡವಾಗಿ ಪುಷ್ಪಾರ್ಚನೆ ನಡೆಯಿತು. ಎಂದಿನಂತೆ ಈ ಬಾರಿಯೂ ಸಂಸದೆ ಶೋಭಾ ಕರಂದ್ಲಾಜೆ ಮಾವುತ ಹಾಗೂ ಕಾವಾಡಿಗರಿಗೆ ಉಪಹಾರ ಬಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com