ಭಿಕ್ಷುಕರನ್ನೂ ಮತದಾರರನ್ನಾಗಿ ನೋಂದಣಿ ಮಾಡುವವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಬಾರದು ಎಂದು ಡಿಎಎಆರ್ ಐ ಆಯೋಗಕ್ಕೆ ಒತ್ತಡ ಹೇರಿದೆ. ಡಿಎಎಆರ್ ಐ ಸಂಚಾಲಕ ರವಿ ಬಂಗೇರ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಗೆ ಪತ್ರ ಬರೆದಿದ್ದು, ರಾಜ್ಯದ ಶೇ.5 ರಷ್ಟು ಜನಸಂಖ್ಯೆ ಭಿಕ್ಷಾಟನೆಯಲ್ಲಿ ತೊಡಗಿದ್ದು, ಈ ಪೈಕಿ ಬಹುತೇಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಲ್ಲ. ಅಷ್ಟೇ ಅಲ್ಲದೇ ಅವರಿಗೆ ವಸತಿಯೂ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.