ನೀಲಸಂದ್ರದ ನಿವಾಸಿ ಮಜಾರ್ ಖಾನ್ (28) ಬಂಧಿತ ಆರೋಪಿ., ತನ್ನ ಹಳೇ ದ್ವಿಚಕ್ರ ವಾಹನದಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಧರ್ರೆಡ್ಡಿ ಅವರ ಮನೆ ಬಳಿ ಬಂದು 'ರೆಡ್ಡಿ ಅವರು ಎಷ್ಟೊತ್ತಿಗೆ ಬರುತ್ತಾರೆ' ಎಂದು ಪದೇ ಪದೇ ಕೇಳುತ್ತಿದ್ದ. ಅನುಮಾನಗೊಂಡ ಜೆಡಿಎಸ್ ಕಾರ್ಯಕರ್ತರು ಆತನನ್ನು ಹಿಡಿದು ದ್ವಿಚಕ್ರ ವಾಹನ ಪರಿಶೀಲಿಸಿದಾಗ ಅದರಲ್ಲಿ ಎಳನೀರು ಕೊಚ್ಚುವ ಮಚ್ಚು ಇತ್ತು.