ಕಾಳೆ, ನಿಹಾಲ್ ಅಲಿಯಾಸ್ ದಾದಾ ಪ್ರವೀಣ್ ಮತ್ತು ಮನೋಜ್ ನವೀನ್ ಕುಮಾರ್ ನನ್ನು ಭೇಟಿಯಾಗಲು ಗನ್ ಮತ್ತು ಗುಂಡುಗಳನ್ನು ಪಡೆಯಲು ದಾವಣಗೆರೆಗೆ ಹೋಗಿದ್ದಾಗಿ ಆರೋಪಿಗಳು ವಿವರಿಸಿದ್ದಾರೆ. "ಫೆಬ್ರವರಿಯಲ್ಲಿ ದಾದಾ ನನಗೆ ನವೀನ್ ಕುಮಾರ್ ನನ್ನು ಬೆಂಗಳೂರು ಪೋಲೀಸರು ಬಂಧಿಸಿರುವುದನ್ನು ತಿಳಿಸಿದರು ಮತ್ತು ಕೆಲ ದಿನಗಳ ಕಾಲಭೂಗತವಾಗಿರುವಂತೆ ಸೂಚಿಸಿದ್ದರು.ಅದರಂತೆ ಕೆಲ ದಿನಗಳ ಕಾಲ ನಾನು ತಲೆಮರೆಸಿಕೊಂಡಿದ್ದೆ. ಆಗ ಭಾಯಿಸಾಬ್ ನನಗೆ ಕರೆ ನೀಡಿ ನಾವು ದಾವಣಗೆರೆಗೆ ತೆರಳಬೇಕು. ಅಲ್ಲಿ ಪ್ರವೀಣ್ ಕೆಲ ಹುಡುಗರನ್ನು ನಮಗೆ ಪರಿಚಯಿಸುವವನಿದ್ದಾನೆ ಎಂದು ತಿಳಿಸಿದ್ದರು.ಹಾಗೆ ಭಾಯಿಸಾಬ್ ಕಾರಿನಲ್ಲಿ ನಾನು ಮತ್ತು ಭಾಯಿಸಾಬ್, ಮನೋಜ್ ದಾವಣಗೆರೆಗೆ ತೆರಳಿ ಪ್ರವೀಣ್ ಗಾಗಿ ಕಾಯುತ್ತಿದ್ದಾಗ ಮಾರುವೇಷದಲ್ಲಿದ್ದ ಪೋಲೀಸರು ನಮ್ಮನ್ನು ಬಂಧಿಸಿದರು."