ಸೇಡಂ: ಸಿಮೆಂಟ್ ಕಾರ್ಖಾನೆಯಲ್ಲಿ ಕ್ರೇನ್ ಬಿದ್ದು ಆರು ಕಾರ್ಮಿಕರು ಸಾವು

ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂನಿಕನ ಕೋಡ್ಲಾ - ಬೆನಕನಹಳ್ಳಿ ಮಧ್ಯೆ ಇರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ...
ಶ್ರೀ ಸಿಮೆಂಟ್ ಕಾರ್ಖಾನೆ
ಶ್ರೀ ಸಿಮೆಂಟ್ ಕಾರ್ಖಾನೆ
ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂನಿಕನ ಕೋಡ್ಲಾ - ಬೆನಕನಹಳ್ಳಿ ಮಧ್ಯೆ ಇರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕ್ರೇನ್ ಕುಸಿದು ಬಿದ್ದು ಆರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತರು ಬಿಹಾರ ಮೂಲದ, ತಬಾರಕ್ ಅಲಿ(25), ಪಿಟಿ ಕಂಚನ್, ಸುಧಾಕರ್, ಜುಬೇರ್, ಬಿತಿನ್ ಹಾಗೂ ಅಜಯ್ ಎಂದು ಗುರುತಿಸಲಾಗಿದೆ. 
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನುಸೇಡಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಶಹಜಾದ್ ಎಂಬ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ.
ಎಂದಿನಂತೆ ಕಾರ್ಮಿಕರು ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದಾಗ ಬಿರುಗಾಳಿಯಿಂದಾಗಿ ಕ್ರೇನ್ ಕುಸಿದು ಬಿದ್ದಿದೆ. ಕ್ರೇನ್ ಅಡಿ ಸಿಲುಕಿದ್ದ ತಬಾರಕ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದು, ಆರು ಮಂದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಐವರು ಮೃತಪಟ್ಟಿದ್ದಾರೆ.
ಸೇಡಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com