ಘಟನೆ ಕುರಿತು ಪ್ರತಿಕ್ರಯಿಸಿರುವ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಾರ್ಶ್ವನಾಥ್ "ಮೀನುಗಾರಿಕೆ ಮುಗಿಸಿ ಬರುವ ವೇಳೆ ಈ ಅಪಘಾತವಾಗಿದೆ, ಒಂದು ಮಲ್ಪೆಗೆ ಸೇರಿದ ದೋಣಿ, ಇನ್ನೊಂದು ಕಾಪುವಿಗೆ ಸೇರಿದ ದೋಣಿ ಮುಳುಗಿದೆ.ಭಾರೀ ಮಳೆ ಕಾರಣ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು" ಎಂದಿದ್ದಾರೆ. ದೋಣಿ ಮುಳುಗಡೆಯಾದ ಸಂಬಂಧ ಪರಿಹಾರ ನೀಡುವ ಕುರಿತು ಪರಿಶೀಲಿಸುವುದಾಗಿ ಅವರು ಹೇಳಿದರು.