ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಕೆಆರ್ಎಸ್ ಜಲಾಶಯವನ್ನು ಇಂದಿನ ಮೈಸೂರು ಒಡೆಯರ್ ಯದುವೀರ್ ಪತ್ನಿ ತ್ರಿಷಿಕಾ ಜೊತೆಗೆ ಆಗಮಿಸಿ ವೀಕ್ಷಣೆ ನಡೆಸಿದ್ದರು.ತಮ್ಮ ವಂಶಜರು ಕಟ್ಟಿಸಿದ ಜಲಾಶಯ ಭರ್ತಿಯಾಗಿರುವುದು ನೋಡಬೇಕೆಂದು ರಾಣಿ ತ್ರಿಷಿಕಾ ಸಹ ಆಸೆ ವ್ಯಕ್ತಪಡಿಸಿದ್ದು ಅವರ ಆಸೆ ಈಡೇರಿಸುವ ಸಲುವಾಗಿ ಯದುವೀರ್ ದಂಪತಿ ಸಮೇತ ಕೆಆರ್ಎಸ್ ಗೆ ಆಗಮಿಸಿದ್ದರು.