ಸರಗಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಪೇದೆಯಿಂದ ಯೂಟ್ಯೂಬ್ ಸಾಂಗ್!

ಬೆಂಗಳೂರಿನಲ್ಲಿ ಇತ್ತೀಚೆಗೆ ಸರಗಳ್ಳರ ಹಾವಳಿ ವಿಪರೀತವಾಗಿದೆ. ಇದು ಪೋಲೀಸ್ ಇಲಾಖೆಗೆ ಸಹ ತಲೆನೋವಾಗಿದ್ದು ಕಳ್ಳರ ಹಿಡಿಯಲು ಅವರು ನಾನಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸರಗಳ್ಳರ ಹಾವಳಿ ವಿಪರೀತವಾಗಿದೆ. ಇದು ಪೋಲೀಸ್ ಇಲಾಖೆಗೆ ಸಹ ತಲೆನೋವಾಗಿದ್ದು ಕಳ್ಳರ ಹಿಡಿಯಲು ಅವರು ನಾನಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದರೊಡನೆಯೇ ಸರಗಳ್ಳರ ಕುರಿತು ಜನ ಜಾಗೃತಿ ಮೂಡಿಸಲು ಸಹ ಅವರು ಮುಂದಾಗಿದ್ದಾರೆ.  ಇದೀಗ ಈ ನಿಟ್ಟಿನಲ್ಲಿ ನಗರದ ಬೈಯಪ್ಪನಹಳ್ಳಿ ಪೋಲೀಸ್ ಕಾನ್ಸ್‌ಟೆಬಲ್‌ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಬೈಯಪ್ಪನಹಳ್ಳಿ ಠಾಣೆ ಪೋಲೀಸ್ ಕಾನ್ಸ್‌ಟೆಬಲ್‌ ಸುಬ್ರಮಣ್ಯ ಶಾನುಭೋಗ ಸರಗಳ್ಳರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ತಾವು ಖುದ್ದು ಹಾಡೊಂದನ್ನು ರಚಿಸಿಹಾಡಿರುವುದಲ್ಲದೆ ಅದನ್ನು ಯುಟ್ಯೂಬ್ ನಲ್ಲಿ ಅಪ್ ಮಾಡಿದ್ದಾರೆ.
ಸುಬ್ರಮಣ್ಯ ಈ ಹಾಡನ್ನು ತಾವೇ ಖುದ್ದಾಗಿ ರಚಿಸಿ ಹಾಡಿದ್ದು ಆಗಸ್ಟ್ 15ರಂದು ಇದನ್ನು ಯೂಟ್ಯೂಬ್ ಗೆ ಹಾಕಿದ್ದಾರೆ. ಚಲನಚಿತ್ರ ಸಂಗೀತ ಸಂಯೋಜಕರಾದ  ಬಿ.ಆರ್‌ ಹೇಮಂತ್‌ ಕುಮಾರ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು  ಬೈಯ್ಯಪ್ಪನಹಳ್ಳಿ ಠಾಣೆ ಸಿಬ್ಬಂದಿಗಳು, ಹಿರಿಯ ನಾಗರಿಕರ ವೇದಿಕೆ ಸದಸ್ಯರು, ಕೃಷ್ಣಯ್ಯನಪಾಳ್ಯ ಸರಕಾರಿ ಶಾಲೆ ಮಕ್ಕಳು ಸಹ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
"ಸಾಮಾನ್ಯವಾಗಿ ಸರಗಳ್ಳರ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು  ಕರಪತ್ರ ಹಂಚುವ ಕೆಲಸ ಮಾಡುತ್ತಾರೆ, ಆದರೆ ಈ ಕುರಿತು  ಹೊಸ ಮಾದರಿಯಲ್ಲಿ ಪ್ರಯತ್ನಿಸುವ ಕುರಿತು ಪೊಲೀಸ್‌ ಆಯುಕ್ತರು ಸಲಹೆ ನೀಡುತ್ತಿದ್ದರು ಇದರಂತೆ ಈ ಗೀತೆ ರಚಿಸಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದೇನೆ.ಇದನ್ನು ನೋಡಿಯಾದರೂ ಜನ ಜಾಗೃತರಾದರೆ ನನ್ನ ಪ್ರಯತ್ನ ಸಾರ್ಥಕವಾಗಲಿದೆ" ಪೇದೆ ಸುಬ್ರಮಣ್ಯ  ಹೇಳಿದ್ದಾರೆ.
ಪೇದೆಯ ಹಾಡು ಬೆಂಗಳೂರಿನ ನಗರ ಪೊಲೀಸ್‌ ಜಾಲತಾಣಗಳಲ್ಲಿ ಶೇರ್‌ ಮಾಡಲಾಗಿದೆ. . 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com