ಬೆಳಗಾವಿ: ಬಕ್ರೀದ್ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಾಪುರ ಜಿಲ್ಲೆಗಳಲ್ಲಿ ಸಾವಿರಾರು ಮೇಕೆ ಮತ್ತು ಕುರಿಗಳು ತಮ್ಮ ಪ್ರಾಣ ತ್ಯಾಗ ಮಾಡಿದವು, ಆದರೆ ಇಂಡಿ ಮೇಕೆಯೊಂದು ಬಕ್ರೀದ್ ಗೆ ಬಲಿಯಾಗದೇ ಪ್ರಾಣ ಉಳಿಸಿಕೊಂಡಿದೆ. ವಿಜಯಾಪುರದ ರಾವ್ ಸಾಹೇಬ್ ದೇವ್ ಜಿ ಈ ಲಕ್ಕಿ ಮೇಕೆಗೆ 2.5 ಲಕ್ಷ ರು ಹಣ ನಿಗದಿ ಮಾಡಿದ್ದರಿಂದ ಕೊಂಡುಕೊಳ್ಳುವವರಿಲ್ಲದೇ ಮತ್ತಷ್ಟು ದಿನ ಬದುಕುವ ಅವಕಾಶ ಸಿಕ್ಕಿದೆ.