ಚಿತ್ರದುರ್ಗ: ಕೇವಲ ಒಂದು ಗಂಟೆಯಲ್ಲಿ 69 ಕೇಸುಗಳ ತೀರ್ಪು ನೀಡಿದ ನ್ಯಾಯಾಧೀಶ ಎಚ್ ಎಂ ವಿರುಪಾಕ್ಷಯ್ಯ

550 ಸಾಕ್ಷಿಗಳು ಮತ್ತು 500 ದಾಖಲೆಗಳನ್ನು ಪರೀಕ್ಷಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: 550 ಸಾಕ್ಷಿಗಳು ಮತ್ತು 500 ದಾಖಲೆಗಳನ್ನು ಪರೀಕ್ಷಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್ ಎಂ ವಿರೂಪಾಕ್ಷಯ್ಯ ಕೇವಲ ಒಂದು ಗಂಟೆಯಲ್ಲಿ 69 ತೀರ್ಪುಗಳನ್ನು ನೀಡಿದ್ದಾರೆ.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಸಾಲ ಮರು ಪಾವತಿಯ 58 ಕೇಸುಗಳು, 5 ಅಪಘಾತ ಪ್ರಕರಣಗಳು, 5 ಕಾರ್ಮಿಕ ಕೇಸುಗಳು ಮತ್ತು 1 ಮನವಿ ಕೇಸನ್ನು ನಿನ್ನೆ ನ್ಯಾಯಾಧೀಶ ವಿರುಪಾಕ್ಷಯ್ಯನವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಕೋರ್ಟ್ ಸಂಕೀರ್ಣದಲ್ಲಿ ವಂಚನೆ ಪ್ರಕರಣ ಕೂಡ ಇದರಲ್ಲಿ ಸೇರಿದೆ. ಸಾಲ ಮರುಪಾವತಿಗೆ ಸಂಬಂಧಿಸಿದ ಹೆಚ್ಚಿನ ಕೇಸುಗಳಾಗಿದ್ದವು. ಕಳೆದ ಮೂರು ವರ್ಷಗಳಿಂದ ಈ ಎಲ್ಲಾ ಪ್ರಕರಣಗಳು ಬಾಕಿ ಉಳಿದಿದ್ದವು.

ತ್ವರಿತವಾಗಿ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಒಂದೇ ಹಂತದಲ್ಲಿ ತೀರ್ಪು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com