ಚಿತ್ರದುರ್ಗ: ಕೇವಲ ಒಂದು ಗಂಟೆಯಲ್ಲಿ 69 ಕೇಸುಗಳ ತೀರ್ಪು ನೀಡಿದ ನ್ಯಾಯಾಧೀಶ ಎಚ್ ಎಂ ವಿರುಪಾಕ್ಷಯ್ಯ

550 ಸಾಕ್ಷಿಗಳು ಮತ್ತು 500 ದಾಖಲೆಗಳನ್ನು ಪರೀಕ್ಷಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಿತ್ರದುರ್ಗ: 550 ಸಾಕ್ಷಿಗಳು ಮತ್ತು 500 ದಾಖಲೆಗಳನ್ನು ಪರೀಕ್ಷಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್ ಎಂ ವಿರೂಪಾಕ್ಷಯ್ಯ ಕೇವಲ ಒಂದು ಗಂಟೆಯಲ್ಲಿ 69 ತೀರ್ಪುಗಳನ್ನು ನೀಡಿದ್ದಾರೆ.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಸಾಲ ಮರು ಪಾವತಿಯ 58 ಕೇಸುಗಳು, 5 ಅಪಘಾತ ಪ್ರಕರಣಗಳು, 5 ಕಾರ್ಮಿಕ ಕೇಸುಗಳು ಮತ್ತು 1 ಮನವಿ ಕೇಸನ್ನು ನಿನ್ನೆ ನ್ಯಾಯಾಧೀಶ ವಿರುಪಾಕ್ಷಯ್ಯನವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಕೋರ್ಟ್ ಸಂಕೀರ್ಣದಲ್ಲಿ ವಂಚನೆ ಪ್ರಕರಣ ಕೂಡ ಇದರಲ್ಲಿ ಸೇರಿದೆ. ಸಾಲ ಮರುಪಾವತಿಗೆ ಸಂಬಂಧಿಸಿದ ಹೆಚ್ಚಿನ ಕೇಸುಗಳಾಗಿದ್ದವು. ಕಳೆದ ಮೂರು ವರ್ಷಗಳಿಂದ ಈ ಎಲ್ಲಾ ಪ್ರಕರಣಗಳು ಬಾಕಿ ಉಳಿದಿದ್ದವು.

ತ್ವರಿತವಾಗಿ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಒಂದೇ ಹಂತದಲ್ಲಿ ತೀರ್ಪು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com