ಬೆನ್ನುಹುರಿ ಸಮಸ್ಯೆಯಿರುವ ವಿಶೇಷಚೇತನರಿಗೆ ಮಾಸಾಶನದೊಂದಿಗೆ 5,000 ರೂ. ಹೆಚ್ಚುವರಿಯಾಗಿ ನೀಡಬೇಕು. ಇದುವರೆಗೆ 7 ಬಗೆಯ ಅಂಗವೈಕಲ್ಯ ಹೊಂದಿರುವವರನ್ನು ಗುರುತಿಸಲಾಗಿದೆ. ಈಗ 21 ಬಗೆಯ ಅಂಗವೈಕಲ್ಯ ಹೊಂದಿರುವವರು ರಾಜ್ಯದಲ್ಲಿದ್ದಾರೆ. ಹಿಂದಿನ ಗಣತಿ ಪ್ರಕಾರ 13 ಲಕ್ಷ ವಿಶೇಷಚೇತನರಿದ್ದಾರೆ. ಹೊಸದಾಗಿ ಗಣತಿ ನಡೆಸಲು ತಯಾರಿ ನಡೆದಿದ್ದು, ಇದಕ್ಕೆ ಮುಖ್ಯಮಂತ್ರಿಯವರು ಶೀಘ್ರ ಚಾಲನೆ ನೀಡಬೇಕು ಸಚಿವೆ ಜಯಮಾಲಾ ಮನವಿ ಮಾಡಿದ್ದಾರೆ.