ಎಲೈಟ್ ಮ್ಯಾಟ್ರಿಮೋನಿಯ ಜಾಹೀರಾತು ನೋಡಿದ ರಾಮಕೃಷ್ಣ, ತಮ್ಮ ಮಗಳ ಹೆಸರನ್ನು ನೋಂದಾಯಿಸಿದ್ದರು. ಮೂರು ತಿಂಗಳು ಕಳೆದರೂ ತಮ್ಮ ಮಗಳಿಗೆ ಸೂಕ್ತವಾದ ವರ ಸಿಗಲಿಲ್ಲ, ವೈದ್ಯ ಕೋಸ್ಸ್ ಮುಗಿಸಿರುವ ಯಾವುದೇ ವರ ಸಿಗಲೇ ಇಲ್ಲ. ಹೀಗಾಗಿ ತಮ್ಮ ಹಣ ವಾಪಸ್ ನೀಡುವಂತೆ ಮ್ಯಾಟ್ರಿಮೋನಿಗೆ ಮನವಿ ಮಾಡಿದ್ದರು, ಶುಲ್ಕದ ಹಣವನ್ನು ತಮ್ಮ ಕಾಲಿನ ಶಸ್ತ್ರ ಚಿಕಿತ್ಸೆಗೆ ಬಳಸಬೇಕೆಂದು ಕೇಳಿದ್ದರು, ಆದರೆ ಮ್ಯಾಟ್ರಿಮೋನಿ ಯವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಹೀಗಾಗಿ ರಾಮಕೃಷ್ಣ ಬೆಂಗಳೂರು ನಗರ ಜಿಲ್ಲೆಯ ಗ್ರಾಹಕರ ವಿವಾದ ಪರಿಹಾರ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು.