ಬೆಂಗಳೂರು: ಅಂತ್ಯ ಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಜೇನು ದಾಳಿ, ಓರ್ವ ಸಾವು

ಗ್ರಾಮದ ಹಿರಿಯ ಮಹಿಳೆಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಜೇನು ನೊಣ ದಾಳಿ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಗ್ರಾಮದ ಹಿರಿಯ ಮಹಿಳೆಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಜೇನು ನೊಣ ದಾಳಿ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ತಮಿಳುನಾಡು ಗಡಿ ಭಾಗ ಕೆಂಪಟ್ಟಿ ಗ್ರಾಮದಲ್ಲಿ ನಡೆದಿದೆ,
ಗ್ರಾಮದ ಹಿರಿಯ ಮಹಿಳೆ 102 ವರ್ಷದ ಶತಾಯುಷಿ ಮಹಿಳೆ ಮಂಗಳವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದರು.  ಈ ವೇಳೆ ಗ್ರಾಮಸ್ಥರೆಲ್ಲರೂ ಸೇರಿ ಹಿರಿಯ ಮಹಿಳೆಗೆ ಗೌರವ ಸಲ್ಲಿಸಿ ಸ್ಮಶಾನಕ್ಕೆ ತೆರಳುವಾಗ ಮೆರೆವಣಿಗೆ ಮಾಡಿ ಪಟಾಕಿ ಹಚ್ಚಿದರು, ಪಟಾಕಿ ಕಿಡಿ ಮರವೊಂದಕ್ಕೆ ಗುಲಿದ ಪರಿಣಾಮ ಅಲ್ಲಿದ್ದ ಜೇನುಗೂಡಿನಿಂದ ಮೇಲೆದ್ದ ಜೇನು ನೊಣಗಳು ದಾಳಿ ಮಾಡಿವೆ.ಈ ವೇಳೆ ರಾಮಕ್ಕ ದೇಹವನ್ನು ಅಲ್ಲಿಯೇ ಇದ್ದ ಹೊಂಡಕ್ಕೆ ಹಾಕಿ ಗ್ರಾಮಸ್ಥರೆಲ್ಲಾ ಓಡಿಹೋಗಿದ್ದಾರೆ, 
ಅದರಲ್ಲಿ ರಾಜಪ್ಪ(55) ಎಂಬ ವ್ಯಕ್ತಿಗೆ ತೀವ್ರ ಗಾಯಗಳಾದ ಪರಿಣಾಮ ಆತನನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ, ಗಾಯಗೊಂಡ ಅನೇಕರು ಆನೇಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com