ಕುಂಬಳೆ ಅನಂತಪುರದ ಈಶ್ವರಯ್ಯ ಹಲವು ರೀತಿಯ ಲಲಿತ ಕಲೆಯ ಕಲಾವಿದರುಗಳಿಗೆ,ಕಲಾಸ್ವಾದಕರಿಗೆ, ಕಲಾ ಚಿಂತಕರಿಗೆ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ, ಸಾಹಿತ್ಯಾಸಕ್ತರಿಗೆ ಹೀಗೆ ಹಲವು ಕ್ಷೇತ್ರದ ಜನರಿಗೆ ಚಿರಪರಿಚಿತವಾಗಿದ್ದ ಹೆಸರು. ಕನ್ನಡದ ಪ್ರಸಿದ್ದ ಮಾಸ ಪತ್ರಿಕೆ ತುಷಾರ, ಉದಯವಾಣಿ ಸಾಪ್ತಾಹಿಕ ಪುರವಣಿ ಮಾಜಿ ಸಂಪಾದಕರಾಗಿದ್ದ ಇವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪತ್ರಕರ್ತರಾಗಿ ಉದಯವಾಣಿ ಗೆ ಸೇರಿದ್ದರು.