ಚುನಾವಣಾ ಕಣಕ್ಕಿಳಿಯಲು ಜನಸಂಗ್ರಾಮ ಪರಿಷತ್ ಚಿಂತನೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಸಂಗ್ರಾಮ ಪರಿಷತ್ ಚಿಂತನೆ ನಡೆಸಿದೆ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್. ಆರ್. ಹಿರೇಮಠ್ ಹೇಳಿದ್ದಾರೆ.
ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರ(ಸಾಂದರ್ಭಿಕ ಚಿತ್ರ)
ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರ(ಸಾಂದರ್ಭಿಕ ಚಿತ್ರ)
Updated on

ಗದಗ್ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು  ಜನಸಂಗ್ರಾಮ ಪರಿಷತ್  ಚಿಂತನೆ ನಡೆಸಿದ್ದು, ಈ ಕುರಿತು ಇದೇ ತಿಂಗಳ 7 ರಂದು ಧಾರವಾಡದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್. ಆರ್. ಹಿರೇಮಠ್ ಹೇಳಿದ್ದಾರೆ.

ಫೆ.24ರಿಂದ ಮಾರ್ಚ್ 2ರವರೆಗೆ  ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮತದಾರರ ಜಾಗೃತಿ ಜಾಥಾ ಹಾಗೂ ಸಮಾವೇಶ ನಡೆಯಲಿದೆ. ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಈ ನಾಲ್ಕು ಸಮಸ್ಯೆಗಳ ಕುರಿತು ಜಾಥಾದಲ್ಲಿ ಗಮನ ಸೆಳೆಯಲಾಗುವುದು ಹಾಗೂ  ಮೂರು ಪ್ರಮುಖ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವಂತೆ ಮತದಾರರಲ್ಲಿ ಮನವಿ ಮಾಡಲಾಗುವುದು ಎಂದರು.

‘ಫೆ.24ರಂದು ಕೂಡಲಸಂಗಮದಿಂದ ಜಾಥಾ ಪ್ರಾರಂಭಗೊಳ್ಳಲಿದ್ದು, ಫೆ. 25ರಂದು ನವಲಗುಂದದಲ್ಲಿ, ಫೆ.27ರಂದು ಗದುಗಿನಲ್ಲಿ ಸಮಾವೇಶ ನಡೆಯಲಿದೆ. ಗದುಗಿನ ಸಮಾವೇಶದಲ್ಲಿ ತೋಂಟದ ಶ್ರೀಗಳು ಸಾನ್ನಿಧ್ಯ ವಹಿಸುವರು. ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಭಾಗವಹಿಸುವರು. ಫೆ. 28ರಂದು ಶಿಶುನಾಳದಲ್ಲಿ ಜಾಥಾ ನಡೆಯಲಿದ್ದು, ಮಾ.2ರಂದು ಹಾವೇರಿಯಲ್ಲಿ ಕೊನೆಗೊಳ್ಳಲಿದೆ’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com