ಈ ಬಗ್ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ, ಬಾಣಸವಾಡಿ ಮತ್ತು ಹೆಬ್ಬಾಳ ಮಧ್ಯೆ 19 ಕಿಲೋ ಮೀಟರ್ ದೂರದ ಸಬ್ ಅರ್ಬನ್ ರೈಲ್ವೆ ಸಂಪರ್ಕ ಮತ್ತು ಚನ್ನ ಪಟ್ಟಣ ಹಾಗೂ ಬೈಯಪ್ಪನಹಳ್ಳಿ ಮಾರ್ಗವಾಗಿ ಕರ್ಮೆಲರಾಮ್ ಗೆ ಸಬ್ ಅರ್ಬನ್ ರೈಲ್ವೆ ಸಂಪರ್ಕವನ್ನು ದ್ವಿಗುಣ ಯೋಜನೆ ವಿಭಾಗದಲ್ಲಿ ಕೈಗೊಳ್ಳಲಾಗುತ್ತದೆ. ಯೋಜನೆಗೆ ಸಂಬಂಧಪಟ್ಟಂತೆ 1 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಮುಂಗಡ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.