ಹೀಗಿದ್ದ ಈ ಗ್ರಾಮದ ದೇವಾಲಯದಲ್ಲಿ ಕಳೆದ ಶನಿವಾರ ಗಂಟೆ ಕಳುವಾಗಿರುವುದು ಎಲ್ಲರೂ ಹೌಹಾರುವಂತೆ ಮಾಡಿದೆ. ಹೀಗಾಗಿ ಅವರೆಲ್ಲಾ ದೇವರ ಶಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದ್ದಾರೆ, ದೇವಾಲಯದ ಮುಂದೆ ಸೇರಿದ ಊರಿನ ಗ್ರಾಮಸ್ಥರು, ದೊಡ್ಡ ಕಬ್ಬಿಣದ ಸರಪಳಿಯೊಂದನ್ನು ದೇವಾಲಯದ ಮುಂದಿನ ಬಾಗಿಲಲ್ಲಿ ಕಟ್ಟಿ ದ್ದಾರೆ, ದೇವಿ ಕಳ್ಳನನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ. ತನ್ನ ನಿಜವಾದ ಶಕ್ತಿ ಉಪಯೋಗಿಸಿ ಕಳ್ಳನನ್ನು ಹಿಡಿದು ಗಂಟೆಯನ್ನು ವಾಪಸ್ ತರುವಂತೆ ಗಡುವು ನೀಡಿದ್ದಾರೆ.