ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಗೆ ಪುಟ್ಟರಾಜ ಸಮ್ಮಾನ ಪ್ರಶಸ್ತಿ

ಪ್ರಸಿದ್ಧ ಸಂಗೀತ ವಿದ್ವಾಂಸರಾದ ಆರ್.ಕೆ ಪದ್ಮನಾಭ ಧಾರವಡದ ಪುಟ್ಟರಾಜ ಗವಾಯಿ ಪ್ರತಿಷ್ಠಾನ ನೀಡುವ ’ಪುಟ್ಟರಾಜ ಸಮ್ಮಾನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಆರ್.ಕೆ. ಪದ್ಮನಾಭ
ಆರ್.ಕೆ. ಪದ್ಮನಾಭ
ಮೈಸೂರು: ಪ್ರಸಿದ್ಧ ಸಂಗೀತ ವಿದ್ವಾಂಸರಾದ ಆರ್.ಕೆ ಪದ್ಮನಾಭ ಧಾರವಡದ ಪುಟ್ಟರಾಜ ಗವಾಯಿ ಪ್ರತಿಷ್ಠಾನ ನೀಡುವ ’ಪುಟ್ಟರಾಜ ಸಮ್ಮಾನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಒಂದು ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿರುವ ಈ ಪ್ರಶಸ್ತಿಯನ್ನು ಪುಟ್ಟರಾಜ ಗವಾಯಿಯವರ 105ನೇ ಜನ್ಮ ದಿನದ ಪ್ರಯುಕ್ತ ಮಾ.3ರಂದು  ಮೈಸೂರಿನ ಕಲಾಮಂದಿರದಲ್ಲಿ  ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ವೆಂಕಟೇಶಕುಮಾರ್ ಹೇಳಿದರು.
ಒಬ್ಬ ಸಂಗೀತಗಾರ ಹಾಗೂ ಸಮರ್ಥ ವಾಗ್ಗೇಯಕಾರರೂ ಆಗಿರುವ ಆರ್.ಕೆ. ಪದ್ಮನಾಭ ಬಹುಮುಖ ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ. ಪರಮಗುರು, ವಾದಿರಾಜಗುರುವರೇಣ್ಯರ ಶಿಷ್ಯರಾದ ಇವರು ಹಲವಾರು ಶಿಷ್ಯರಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆಯುತ್ತಾ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com