ಕಚ್ಚಾ ಬಾಂಬ್ ಹಿಡಿದಿದ್ದ ವ್ಯಕ್ತಿ ಕಾರ್ಯಕ್ರಮ ನಡೆಯುತ್ತಿದ್ದಾಗ ಶಾಸಕರತ್ತ ಬಾಂಬ್ ಎಸೆಯಲು ಮುಂದಾಗಿದ್ದಾನೆ. ಆಗ ಆತನ ಕೈಯಲ್ಲಿದ್ದಾಗಲೇ ಬಾಂಬ್ ಸ್ಪೋಟವಾಗಿದೆ. ಪರಿಣಾಮ ವ್ಯಕ್ತಿಯ ಕೈ ಸಂಪೂರ್ಣ ಸುಟ್ಟು ಹೋಗಿದೆ. ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೊಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಇದೀಗ ರೈಮಂಡ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.