ಇನ್ನೂ ಆರೋಪಿಗಳ ಪರ ವಾದಿಸಿದ ವಕೀಲ ಟಾಮಿ ಸೆಬಾಸ್ಟಿಯನ್, ಈ ಪ್ರಕರಣ ಕ್ಷಣ ಹೊತ್ತಿನ ಕೋಪದಿಂದಾಗಿದೆ, 2ನೇ ಆರೋಪಿ ಅರುಣ್ ಬಾಬು ಕೂಡ ಸಂತ್ರಸ್ತನೇ, ವಿದ್ವತ್ ವಿರುದ್ಧ ಆತ ಪೊಲೀಸ್ ಕೇಸು ದಾಖಲಿಸಿದ್ದಾನೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ವಿಶೇಷ ಅಭಿಯೋಜಕರು, ಫರ್ಜಿ ಕೆಫೆಗೆ ಆರೋಪಿಗಳು, ಕಬ್ಬಿಣದ ರಿಂಗ್ ಅನ್ನು ತೆಗೆದುಕೊಂಡು ಹೋಗಿದ್ದಾರೆ,ಅಂದರೆ ಅಲ್ಲಿ ಯಾರದೋ ಮೇಲೆ ಹಲ್ಲೆ ಮಾಡಲು ಮೊದಲೇ ಉದ್ದೇಶ ಇಟ್ಟುಕೊಂಡು ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ, ಇದು ಆಕಸ್ಮಿಕವಾಗಿ ಆದದ್ದಲ್ಲ, ಉದ್ದೇಶ ಪೂರ್ವಕವಾಗಿ ಎಂದು ವಾದಿಸಿದ್ದಾರೆ.