"ಸತೀಶ್ ತನ್ನ ಪತ್ನಿಗೆ ಕರೆ ಮಾಡಿ ತಡರಾತ್ರಿಯ ವೇಳೆ ಅವನನ್ನು ಭೇಟಿಯಾಗಲು ಒತ್ತಾಯಿಸುತ್ತಿದ್ದ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಆಕೆಯನ್ನು ಕೆಲಸದಿಂದ ವಜಾ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.ನನ್ನ ಹೆಂಡತಿ ನನ್ನೊಂದಿಗೆ ಈ ಕುರಿತು ಚರ್ಚಿಸಿದ್ದಾಳೆ.ನಾನು ಈ ಕುರಿತು ಪೋಲೀಸರಿಗೆ ದೂರಿತ್ತಿದ್ದೇವೆ, ನಾನು ಬಿಬಿಎಂಪಿ ಕಾರ್ಪೊರೇಟರ್ ಶೋಭಾ ಜಗದೀಶ್ ಗೌಡರನ್ನು ಸಹ ಸಂಪರ್ಕಿಸಿದ್ದೇನೆ, ಅವರು ಸತೀಶ್ ರನ್ನು ಭೇಟಿ ಮಾಡಿ ಸಭ್ಯವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಸತೀಶ್ ಮಾತ್ರ ತನ್ನ ವರ್ತನೆಯನ್ನು ಮುಂದುವರಿಸಿದ್ದರು. " ಸಂತ್ರಸ್ತೆಯ ಪತಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.