ಶಾಂತಿನಗರ ವಿಧಾನಸಭಾ ಕ್ಷೇತ್ರದ ಆಶಾಲಾ ಮಕ್ಕಳಿಗೆ ಶಾಸಕ ಹ್ಯಾರೀಸ್ ಅವರು ಬ್ಯಾಗ್ ಹಾಗೂ ಊಟ ವಿತರಿಸಲಿದ್ದಾರೆ, ಇದಕ್ಕಾಗಿ ಅವರನ್ನು ಹಾಕಿ ಮೈದಾನಕ್ಕೆ ಕರೆತರಬೇಕೆಂದು ಶಾಲೆಗಳಿಗೆ ಶಾಸಕರ ಕಛೇರಿಯಿಂದ ಆದೇಶ ಬಂದಿತ್ತು. ಅದರಂತೆ ಬಹುತೇಕ ಶಾಲಾ ಮಕ್ಕಳು ಬೆಳಗ್ಗೆ 10.30ಕ್ಕೆಲ್ಲಾ ಮೈದಾನದಲ್ಲಿ ನೆರೆದಿದ್ದರು. ಆದರೆ ಶಾಸಕ ಹ್ಯಾರೀಸ್ ಮದ್ಯಾಹ್ನ 1 ಗಂಟೆಗೆ ಆಗಮಿಸಿದ ಹೊರತೂ ಯಾರೊಬ್ಬರಿಗೂ ಊಟ ವಿತರಿಸಲಾಗಲಿಲ್ಲ. ಮಕ್ಕಳು ಅರ್ಧದಿನದ ತರಗತಿಗಳನ್ನು ವ್ಯರ್ಥಮಾಡಿಕೊಂಡದ್ದಲ್ಲದೆ ಬಿಸಿಲಿನಲ್ಲಿ ನಿಂತು ದಣಿಯಬೇಕಾಯಿತು.