ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ನಿಂದ ಸಾಲ ಪಡೆಯಲು, ಸಬ್ಸಿಡಿ ಬೀಜ ಖರೀದಿಸಲು ಮತ್ತು ಬೆಳೆ ವಿಮೆ ಇತ್ಯಾದಿಗಳಿಗೆ ರೈತರಿಗೆ ತಮ್ಮ ಜಮೀನಿನ ಪಹಣಿ ಅಥವಾ ದಾಖಲೆ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಪಹಣಿಯಲ್ಲಿ ಭೂಮಿಯ ಸರ್ವೆ ಸಂಖ್ಯೆ, ಭೂಮಿಯ ವಿಧಾನ, ನೀರಿನ ಮೂಲ, ಮಾಲಿಕರ ಭಾಗದ ಜಮೀನು ಮತ್ತು ಇತರ ವಿವರಗಳನ್ನು ಹೊಂದಿರುತ್ತದೆ. ಆಯಾ ತಾಲ್ಲೂಕಿನ ತಹಸಿಲ್ದಾರರ ಸಹಿಯನ್ನು ಪಹಣಿ ಪತ್ರದಲ್ಲಿ ಇರುತ್ತದೆ.