ಇದೊಂದು ಜೀವನವನ್ನೇ ಬದಲಾಯಿಸುವ ಒಪ್ಪಂದವಾಗಿದ್ದು, ಇದರಡಿಯಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪ್ರಾಥಮಿಕ ಚಿಕಿತ್ಸೆಯ ಕಿಟ್ ಗಳನ್ನು ಇಡಲಿದೆ. ಪ್ರಯಾಣಿಕರ ಜೀವವನ್ನು ಕಾಪಾಡುವ ತಂತ್ರಗಳ ಬಗ್ಗೆ 35 ಸಾವಿರಕ್ಕೂ ಅಧಿಕ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗೆ ಗೋಲ್ಡನ್ ಅವರ್ ತರಬೇತಿ ನೀಡಲಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.