ಕಾರವಾರ ಜಿಲ್ಲೆಯ ಸಿರ್ಸಿಯಲ್ಲಿ ಖಾಸಗಿ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ 28 ವರ್ಷದ ಮೌನೇಶ್ ಪೋತರಾಜ್, ನಿನ್ನೆ ಸಂಕ್ರಾಂತಿ ಹಬ್ಬಕ್ಕೆಂದು ತಮ್ಮ ಕುಟುಂಬದ ಸದಸ್ಯರಿಗೆ ಉಡುಗೊರೆ ಖರೀದಿಸಿ ಬೈಕ್ ನಲ್ಲಿ ತಮ್ಮ ಮನೆಯಾದ ಗದಗ್ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡೆಗೆ ಸಂಚರಿಸುತ್ತಿದ್ದರು.ಹಾನಗಲ್-ಬಂಕಾಪುರ ರಸ್ತೆಯ ಗುಂಡೂರು ಗ್ರಾಮದಲ್ಲಿ ನವೋದಯ ಕೇಂದ್ರೀಯ ವಿದ್ಯಾಲಯ ಶಾಲೆಯ ಹತ್ತಿರ ರಸ್ತೆಬದಿಯ ಮರಕ್ಕೆ ಮೊನ್ನೆ ಶನಿವಾರ ರಾತ್ರಿ ಬೈಕ್ ಗುದ್ದಿ ಪೋತೇಶ್ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.