ಕಳೆದ ವಾರದಿಂದ ಕಳಸಾ ಬಂಡೂರಿ ಯೋಜನೆಯ ಕನಕುಂಬಿ ಗ್ರಾಮದ ಯೋಜನೆಯ ಸ್ಥಳ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಸಚಿವರುಗಳು, ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಕುತೂಹಲದ ತಾಣವಾಗಿದೆ. ಇಲ್ಲಿ ಯಾವುದೇ ನಿರ್ಮಾಣ ನಡೆಯುತ್ತಿಲ್ಲ ಎಂದು ಕಳೆದ ವಾರ ಅಲ್ಲಿಗೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರೂ ಕೂಡ ಗೋವಾ ಸರ್ಕಾರದಿಂದ ನಾಲ್ವರು ಎಂಜಿನಿಯರ್ ಗಳ ತಂಡದ ರಚನೆ ಇಲ್ಲಿನ ಕನ್ನಡ ಕಾರ್ಯಕರ್ತರನ್ನು ಸಿಟ್ಟು ತರಿಸಿದೆ.