ಸೀಟು ಹಂಚಿಕೆಯಲ್ಲಿ ಹಗರಣ: ಕೆಲ ವರ್ಷಗಳ ಹಿಂದೆ ಸೀಟು ಹಂಚಿಕೆಯಲ್ಲಿ ಹಗರಣ ನಡೆದಿತ್ತು ಎಂದು ವರದಿಯಾಗಿತ್ತು. ಸೀಟು ಹಂಚಿಕೆ ಹಂತದಲ್ಲಿ, ಕೆಲವು ಅಭ್ಯರ್ಥಿಗಳು ಕೋಟಾವನ್ನು ಬದಲಾಯಿಸಿದ್ದರು. ಕೆಲವರು ಗ್ರಾಮೀಣ ಕೋಟಾ, ಎಸ್/ಎಸ್ ಟಿ ಮತ್ತು ಕನ್ನಡ ಮಾಧ್ಯಮ ಕೋಟಾದಡಿ ಸೀಟು ಬೇಕೆಂದು ಪ್ರತಿಪಾದಿಸಿದ್ದರು. ಆದರೆ ಅರ್ಜಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಯೆಂದು ನಮೂದಿಸಿದ್ದರು. 170ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಪರೀಕ್ಷೆ ನಡೆಸಲಾಗಿತ್ತು. ಈ ಹಗರಣದ ವಿಚಾರಣೆ ಇನ್ನೂ ಸಿಐಡಿಯಲ್ಲಿದೆ.