ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಂಕಿ-ಅಂಶ ಖಾತೆ ಸಚಿವ ಎಂ.ಆರ್. ಸೀತಾರಾಮ್, ಅಗತ್ಯ ಅಂಕಿ-ಅಂಶ ಲಭ್ಯವಾದ ಕಾರಣ ವಿವಿಧ ಇಲಾಖೆಗಳಲ್ಲಿ ಬಳಸಲಾಗದ ಅನುದಾನವನ್ನು ಕ್ರೋಡೀಕರಿಸಿ, ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಾಧ್ಯವಾಯಿತು, ಈ ಹಣದಲ್ಲಿ 4 ಸಾವಿರ ಶಾಲಾ-ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.