ಬಂಟ್ವಾಳ: ಈ ಬಾರಿಯ ವಿಧಾನಸಭಾ ಚುನಾವಣೆ ರಾಮ ಮತ್ತು ಅಲ್ಲಾಹುವಿನ ನಡುವಿನದು ಎಂದು ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಮಾತನಾಡಿದ ಸುನೀಲ್ ಕುಮಾರ್, ಇಲ್ಲಿನ ಚುನಾವಣೆ ಬಿಜೆಪಿ , ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನಡೆಯುವಂತಹದ್ದಲ್ಲಾ, ಇದು ರಾಮ ಮತ್ತು ಅಲ್ಲಾಹುವಿನ ನಡುವೆ ನಡೆಯುವ ಚುನಾವಣೆ ಎಂದಿದ್ದಾರೆ.
ಬಂಟ್ವಾಳದಲ್ಲಿ ರಾಮನನ್ನು ಪ್ರೀತಿಸುವ ಅಭ್ಯರ್ಥಿ ಗೆಲ್ಲುತ್ತಾರೋ ಅಥವಾ ಅಲ್ಲಾಹುವನ್ನು ಪ್ರೀತಿಸುವ ಅಭ್ಯರ್ಥಿ ಗೆಲ್ಲುತ್ತಾರೋ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಅಲ್ಲಾಹುವಿನ ಆಶೀರ್ವಾದದಿಂದ ಇಲ್ಲಿನ ಶಾಸಕ , ಸಚಿವ, ರಾಮನಾಥ ರೈ ಹಿಂದಿನ ಚುನಾವಣೆಗಳಲ್ಲಿ ಗೆಲ್ಲುತ್ತಾ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.
ಸುನೀಲ್ ಕುಮಾರ್ ಟೀಕೆಗೆ ಪ್ರತಿಕ್ರಿಸಿದ ಸಚಿವ ರಮಾನಾಥ್ ರೈ, ಈ ಬಾರಿ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಎಂದಿದ್ದಾರೆ.
Advertisement