ಬೆಂಗಳೂರಿನಲ್ಲಿ ಬಿಜೆಪಿಯಿಂದ ಗೋ ರಕ್ಷಣೆ ಯಜ್ಞ ಆಯೋಜನೆ

ಗೋ ರಕ್ಷಣೆ ಪಡೆಯ ರಾಜ್ಯ ಬಿಜೆಪಿ 24 ಗಂಟೆಗಳ ಗೋ ರಕ್ಷಣೆ ಅಷ್ಟಯಾಮ ಯಜ್ಞವನ್ನು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಗೋ ರಕ್ಷಣೆ ಪಡೆಯ ರಾಜ್ಯ ಬಿಜೆಪಿ 24 ಗಂಟೆಗಳ ಗೋ ರಕ್ಷಣೆ ಅಷ್ಟಯಾಮ ಯಜ್ಞವನ್ನು ಪುಟ್ಟೇನಹಳ್ಳಿಯ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದೆ.
ಗೋ ರಕ್ಷಣೆ ಕೇಂದ್ರದ ರಾಜ್ಯ ಸಂಚಾಲಕ ಸಿದ್ದಾರ್ಥ ಗೊಯೆಂಕಾ ಮಾತನಾಡಿ, ಗೋವುಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲು ಮತ್ತು ಗೋವುಗಳ ಸಂಖ್ಯೆಯನ್ನು ಹೆಚ್ಚಿಸಿ ದೇಶದ ಆರ್ಥಿಕತೆಯನ್ನು ಬಲಿಷ್ಟಗೊಳಿಸಲು ಯಜ್ಞವನ್ನು ಆಯೋಜಿಸಲಾಗಿದೆ.
ಇದೇ ಶುಕ್ರವಾರ ಯಜ್ಞ ಆರಂಭಗೊಂಡು ಮರುದಿನ ಅಪರಾಹ್ನ 3 ಗಂಟೆಗೆ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಶಾಸಕರಾದ ಬಿ.ಎನ್.ವಿಜಯ್ ಕುಮಾರ್ ಮತ್ತು ಸತೀಶ್ ರೆಡ್ಡಿ ಯಜ್ಞದಲ್ಲಿ ಭಾಗವಹಿಸಲಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಬಿಜೆಪಿ ಮೆಗಾ ರ್ಯಾಲಿಗೆ ಮುನ್ನ ಈ ಯಜ್ಞ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಅರಮನೆ ಮೈದಾನದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com