ಬೆಂಗಳೂರು: ನೇಪಾಳದಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಕೈಲಾಸ ಮಾನಸ ಸರೋವರಕ್ಕೆ ತೆರಳಿದ್ದ ರಾಜ್ಯದ ಯಾತ್ರಾರ್ಥಿಗಳು ಮಾರ್ಗಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಕರ್ನಾಟಕದ 13 ಯಾತ್ರಾರ್ಥಿಗಳ ಗುಂಪಿನ ಕೆಲವರು ಕುಟುಂಬದವರೊಂದಿಗೆ ಸಂಪರ್ಕಕ್ಕೆ ಸಿಕ್ಕಿದ್ದು,ಅವರೆಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.
ಮಾನಸ ಸರೋವರ ಮಾರ್ಗದಲ್ಲಿನ ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿಯೇ ಕೆಲ ಯಾತ್ರಾರ್ಥಿಗಳು ಮಳೆಯಿಂದಾಗಿ ಯಾವುದೇ ಸಂಪರ್ಕಕ್ಕೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ ಗೋಕಾಕ್ ನಿಂದ ತೆರಳಿದ ಲೀಲಾ ಮತ್ತು ಆಕೆಯ ಸ್ನೇಹಿತೆ ಬೈಲಹೊಂಗಲದ ಗೀತಾ ಹೊಸಮಠ್, ಸೋಮವಾರ ಬೆಳಗ್ಗೆಯಿಂದ ಕುಟುಂಬದವರೊಂದಿಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದಾಗಿ ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿದ್ದರು.
Advertisement