ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ ಅಂಗನವಾಡಿ ಶಿಕ್ಷಕಿ!

ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಕತ್ತನ್ನು ಬ್ಲೇಡಿನಿಂದ ಕೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ  ಅಂಗನವಾಡಿ ಶಿಕ್ಷಕಿ!
ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ ಅಂಗನವಾಡಿ ಶಿಕ್ಷಕಿ!
Updated on
ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಕತ್ತನ್ನು ಬ್ಲೇಡಿನಿಂದ ಸೀಳಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ  ಕಾಸಘಟ್ಟ ಅಂಗನವಾಡಿ ಕೇಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಅದೇ ಗ್ರಾಮದ ನಿವಾಸಿ ಪೃಥ್ವಿರಾಜ್(7)  ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಂಗನವಾಡಿ ಶಿಕ್ಷಕಿ ಮುನಿರತ್ನಮ್ಮ ಎನ್ನುವವರು ಈ ಕೃತ್ಯ ಎಸಗಿದ್ದು ಬಾಲಕ ಪ್ರಥ್ವಿರಾಜ್ ತನ್ನ ಮೊಮ್ಮಗನೊಂದಿಗೆ ಜಗಳವಾಡಿದ್ದನೆನ್ನುವ ಕಾರಣಕ್ಕೆ ಅವನ ಮೇಲೆ ಬ್ಲೇಡಿನಿಂದ ಹಲ್ಲೆ ನಡೆಸಿದ್ದಾ:ಳೆ. ಆಕೆ ಹುಡುಗನನ್ನು ಥಳಿಸಿದ್ದಳಲ್ಲದೆ ಬ್ಲೇಡ್ ನಿಂದ ಆತನ ಕುತ್ತಿಗೆ ಕುಯ್ದಿದ್ದಾಳೆ.
ಸಧ್ಯ ಗಾಯಾಳು ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಶಿಕ್ಷಕಿ ವಿರುದ್ಧ ಬಾಲಕನ ಪೋಷಕರು ದೊಡ್ಡಬೆಳವಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com