ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ ಅಂಗನವಾಡಿ ಶಿಕ್ಷಕಿ!

ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಕತ್ತನ್ನು ಬ್ಲೇಡಿನಿಂದ ಕೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ  ಅಂಗನವಾಡಿ ಶಿಕ್ಷಕಿ!
ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ ಅಂಗನವಾಡಿ ಶಿಕ್ಷಕಿ!
ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಕತ್ತನ್ನು ಬ್ಲೇಡಿನಿಂದ ಸೀಳಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ  ಕಾಸಘಟ್ಟ ಅಂಗನವಾಡಿ ಕೇಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಅದೇ ಗ್ರಾಮದ ನಿವಾಸಿ ಪೃಥ್ವಿರಾಜ್(7)  ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಂಗನವಾಡಿ ಶಿಕ್ಷಕಿ ಮುನಿರತ್ನಮ್ಮ ಎನ್ನುವವರು ಈ ಕೃತ್ಯ ಎಸಗಿದ್ದು ಬಾಲಕ ಪ್ರಥ್ವಿರಾಜ್ ತನ್ನ ಮೊಮ್ಮಗನೊಂದಿಗೆ ಜಗಳವಾಡಿದ್ದನೆನ್ನುವ ಕಾರಣಕ್ಕೆ ಅವನ ಮೇಲೆ ಬ್ಲೇಡಿನಿಂದ ಹಲ್ಲೆ ನಡೆಸಿದ್ದಾ:ಳೆ. ಆಕೆ ಹುಡುಗನನ್ನು ಥಳಿಸಿದ್ದಳಲ್ಲದೆ ಬ್ಲೇಡ್ ನಿಂದ ಆತನ ಕುತ್ತಿಗೆ ಕುಯ್ದಿದ್ದಾಳೆ.
ಸಧ್ಯ ಗಾಯಾಳು ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಶಿಕ್ಷಕಿ ವಿರುದ್ಧ ಬಾಲಕನ ಪೋಷಕರು ದೊಡ್ಡಬೆಳವಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com