ಚಿಕ್ಕಮಗಳೂರು-ಹಾಸನ ಮಾರ್ಗದ ಕುಪ್ಪಳ್ಳಿ ಸಮೀಪ ಈ ಘಟನೆ ನಡೆದಿದೆ. ಚಿಕ್ಕಮಗಳೂರಿನಿಂದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ಚಾಲಕ ಜಿಶಾನ್ ಅಸಾದ್ ಹಾಸನ ಸಮೀಪದ ಕುಪ್ಪಳ್ಳಿಗೆ ತಲುಪಿದ್ದಾಗ ಅಲ್ಲಿ ಎಸ್ಆರ್ ಟಿಸಿ ಬಸ್ ಮತ್ತು ಮಿನಿ ಟೆಂಪೋ ನಡುವೆ ಡಿಕ್ಕಿಯಾಗಿ ನಾಲ್ವರು ಗಾಯಾಳುಗಳು ರಸ್ತೆ ಬದಿಯಲ್ಲೇ ನರಳುತ್ತಿರುವುದನ್ನು ಕಂಡಿದ್ದಾನೆ.