ಅನಾರೋಗ್ಯದ ಕಾರಣ ಶೀರೂರು ಮಠದ ಪಟ್ಟದ ದೇವರನ್ನು ಅದಮಾರು ಶ್ರೀಗಳಿಗೆ ಹಸ್ತಾಂತರಿಸಿದ್ದ ಲಕ್ಷ್ಮೀವರ ತೀರ್ಥರು ಇದೀಗ ಪಟ್ಟದ ದೇವರನ್ನು ಮತ್ತೆ ತನಗೆ ಹಸ್ತಾಂತರಿಸಲು ಕೋರಿದ್ದಾರೆ. ಆದರೆ ಸಭೆ ಉಳಿದ ಯತಿಗಳು ಶಿರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಬೇಕು. ಅವರು ಅಷ್ಟ ಮಠಗಳ ನಿಯಮಗಳಿಗೆ ಅನುಸಾರ ನಡೆಯಬೇಕು. ಅಲ್ಲಿಯವರೆಗೆ ದೇವರ ಹಸ್ತಾಂತರ ಮಾಡಲಾಗದೆಂದು ತೀರ್ಮಾನಿಸಿದ್ದರು.