ಮುಳಬಾಗಿಲು ತಾಲೂಕಿನ ವಮ್ಮ ಸಂದ್ರ ಗ್ರಾಮದ ನಾರಾಯಣಸ್ವಾಮಿ ಪತ್ನಿ ವೇಣುಕುಮಾರಿ ಮಂಗಳವಾರ ಹೆಣ್ಣು ಶಿಶುವಿಗೆ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದರು.ಡೆಲಿವರಿ ಬಳಿಕ ಆಕೆಯನ್ನು ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ. ಆಗ ಆಕೆ ನಿದ್ರೆಗೆ ಜಾರಿದಾಗ 3 ಗಂಟೆ ಸುಮಾರಿನಲ್ಲಿ ಶಿಶುವನ್ನು ಅಪಹರಣ ಮಾಡಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.