ಮೈಸೂರು: ಕಪಿಲಾ ನದಿಗೆ ಜಿಗಿದು ಈಜಲು ಹೋದ ಯುವಕ ನಾಪತ್ತೆ

ನದಿಗೆ ಹಾರಿ ಈಜುವ ಚಾಲೆಂಜ್ ಮಾಡಿದ್ದ ನಾಲ್ವರು ಯುವಕರಲ್ಲಿ ಓರ್ವ ನೀರಲ್ಲಿ ಕೊಚ್ಚಿ ಹೋದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ಮೈಸೂರು: ಕಪಿಲಾ ನದಿಗೆ ಜಿಗಿದು ಈಜಲು ಹೋದ ಯುವಕ ನಾಪತ್ತೆ
ಮೈಸೂರು: ಕಪಿಲಾ ನದಿಗೆ ಜಿಗಿದು ಈಜಲು ಹೋದ ಯುವಕ ನಾಪತ್ತೆ
Updated on
ಮೈಸೂರು: ನದಿಗೆ ಹಾರಿ ಈಜುವ ಚಾಲೆಂಜ್ ಮಾಡಿದ್ದ ನಾಲ್ವರು ಯುವಕರಲ್ಲಿ ಓರ್ವ ನೀರಲ್ಲಿ ಕೊಚ್ಚಿ ಹೋದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ಪಟ್ಟಣ ಸಮೀಪದ ಕಪಿಲಾ ನದಿ, ಕಬಿನಿ ಜಲಾಶಯಕ್ಕೆ ಧುಮುಕಿದ್ದ ಯುವಕರಲ್ಲಿ  ಓರ್ವ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.ಮಳೆಯಿಂದಾಗಿ  ಜಲಾಶಯದಿಂದ ಹೊರ ಹರಿವು ಹೆಚ್ಚಳವಾಗಿದ್ದು ತುಂಬಿದ ನದಿಯಲ್ಲಿ ಈಜುವುದಕ್ಕಾಗಿ ರೈಲ್ವೆ ಬ್ರಿಜ್ ನಿಂದ ಹಾರಿದ್ದಾರೆ.
ನಾಲ್ವರಲ್ಲಿ ಮೂವರು  ಈಜಿ ದಡ ಮುಟ್ಟಿದರೆ ಮುಜಾಫಿರ್​ ಶರೀಫ್ ಎನ್ನುವಾತ ಮಾತ್ರ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕಾಗಮಿಸಿರುವ ಅಗ್ನಿ ಶಾಮಕದಳ, ಈಜು ಪರಿಣಿತರು ಮುದಾಫಿರ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ನಂಜನಗೂಡು ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com