ಶಿರೂರು ಶ್ರೀ ಸನ್ಯಾಸತ್ವದಲ್ಲಿ ಭ್ರಷ್ಟರಾಗಿದ್ದರು. ಶಿರೂರು ಶ್ರೀಗಳು ತಮಗೆ ಮಕ್ಕಳಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದರು. ಹಾಗಾಗಿ ಅವರಿಗೆ ಪಟ್ಟದ ದೇವರು ನೀಡಿಲ್ಲ. ಉಡುಪಿ ಮಠದ ಮಧ್ವ ಪರಂಪರೆಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದರು. ಬಹಿರಂಗವಾಗಿ ಸನ್ಯಾಸತ್ವವನ್ನು ತ್ಯಜಿಸಿದ್ದರು. ಅವರು ಸಂಸಾರಿಯಾಗುವ ಮೂಲಕ ಮಡಿವಂತಿಕೆಯನ್ನು ಬಿಟ್ಟಿದ್ದರು. ಅವರೊಬ್ಬ ಭ್ರಷ್ಟ ಸನ್ಯಾಸಿ ಎಂದು ಗಂಭೀರ ಆರೋಪ ಮಾಡಿದ್ದಾರೆ.