ತುಮಕೂರು: ಡಿವೈಡರ್ ಗೆ ಕಾರ್ ಡಿಕ್ಕಿ, ಆರ್‌ಟಿಓ ಅಧಿಕಾರಿ ಸಾವು

ಕಾರ್ ಒಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಆರ್‌ಟಿಓ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತುಮಕೂರು: ಕಾರ್ ಒಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಆರ್‌ಟಿಓ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾದಲ್ಲಿ ನಡೆದಿದೆ.
ಚಿತ್ರದುರ್ಗದ ಆರ್‌ಟಿಓ ಅಧಿಕಾರಿ ದೇವ್‌ರಾಜ್‌ (50)  ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದು ಕಾರಿನ ಚಾಲಕ ಅಶೋಕ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಶಿರಾಗೆ ಆಗಮಿಸಿದ್ದ ಆರ್‌ಟಿಓ ಅಧಿಕಾರಿ ಹಿಂದಿರುಗುವ ಮಾರ್ಗದಲ್ಲಿ ಅಪಘಾತವಾಗಿದೆ. ಗಾಯಾಳು ಚಾಲಕ ಅಶೋಕ ವರನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com