ಬಿಜೆಪಿ ಶಾಸಕ ರಾಮದಾಸ್‌ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಕುಮಾರಿ

ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಅವರು ತನಗೆ ಮದುವೆಯಾಗುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು...
ಎಸ್ ಎ ರಾಮದಾಸ್ - ಪ್ರೇಮಕುಮಾರಿ
ಎಸ್ ಎ ರಾಮದಾಸ್ - ಪ್ರೇಮಕುಮಾರಿ
Updated on
ಮೈಸೂರು: ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಅವರು ತನಗೆ ಮದುವೆಯಾಗುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪ್ರೇಮಕುಮಾರಿ ಅವರು ಶಾಸಕರ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ಇಂದು ತಮ್ಮ ತಾಯಿ ಜೊತೆ ವಿದ್ಯರಣ್ಯಪುರದಲ್ಲಿರುವ ಬಿಜೆಪಿ ಶಾಸಕರ ಕಚೇರಿಗೆ ಆಗಮಿಸಿದ ಪ್ರೇಮಕುಮಾರಿ, ರಾಮದಾಸ್‌ ಅವರು ನನನ್ನು ಪ್ರೀತಿಸಿ, ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಇದೀಗ ಕೊಟ್ಟ ಮಾತನ್ನು ತಪ್ಪಿದ್ದಾರೆ ಎಂದು ಆರೋಪಿಸಿ ವೇಲ್​ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಅವಾಂತರ ಸೃಷ್ಟಿಸಿದರು.
ಚುನಾವಣೆ ಸಂದರ್ಭ ನೀಡಿದ್ದ ಮಾತು ತಪ್ಪಿದ್ದಾರೆಂದು ಶಾಸಕರ ವಿರುದ್ಧ ಪ್ರೇಮಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನಾಮಪತ್ರ ತಡೆದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. 
ಪೊಲೀಸರ ಮನವೊಲಿಕೆಗೂ ಬಗ್ಗದ ಪ್ರೇಮಕುಮಾರಿ, ನೆಲದ ಮೇಲೆ ಬಿದ್ದು ಉರುಳಾಡಿದ್ದಾರೆ. ಕೊನೆಗೆ ವಿದ್ಯಾರಣ್ಯಪುರಂ ಪೊಲೀಸರು ಪ್ರೇಮಕುಮಾರಿಯನ್ನು ವಶಕ್ಕೆ ಪಡೆದಕೊಂಡಿದ್ದಾರೆ. ಇನ್ನು ಶಾಸಕರ ಬೆಂಬಲಿಗರು ಪ್ರೇಮಕುಮಾರಿ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com