ಬೆಂಗಳೂರಿನ ಹೂಡಿ ಮುನಿಸ್ವಾಮಿ ಲೇಔಟ್ ನಿವಾಸಿ ಯಶವಂತ ಸಾಯಿ (15) ಮೃತಪಟ್ಟಿದ್ದಾನೆ. ಈತನ ಶವವು ಗುರುವಾಯನಕೆರೆ ಸಮೀಪದ ಕುವೆಟ್ಟು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಇದೇ ಕೆರೆ ದಡದಲ್ಲಿ ಆತನ ಶಾಲಾ ಬ್ಯಾಗ್, ಮತ್ತು ಚಪ್ಪಲಿಗಳು ನಿನ್ನೆ (ಬುಧವಾರ) ಪತ್ತೆಯಾಗಿತ್ತು. ಬ್ಯಾಗ್ ಮತ್ತಿತರೆ ವಸ್ತುಗಳು ಕ್ಂಡುಬಂದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧ ಕಾರ್ಯ ನಡೆದಿದ್ದು ಗುರುವಾರ ಮುಂಜಾನೆ ಬಾಲಕನ ಶವ ಕಾಣಿಸಿದೆ.